Monday, June 28, 2010

HISTORY OF HAMPI SEE ONE TIME DONT MISS IT


ವಿದೇಶಿಯರ ಮನದಲ್ಲಿ ಮರೆಯಲಾಗದ ಅದ್ಭುತ ಹಂಪಿ:
ಅದ್ಭುತ, ಅಪರೂಪ, ಅವಿಸ್ಮರಣೀಯ... ಇವು ಹಂಪಿ ನೋಡಿದ ವಿದೇಶಿಯರ ಮನದಾಳದಿಂದ ಬಂದ ಮಾತುಗಳು. ಇಟಲಿಯಿಂದ ಇಂಡಿಯಾಗೆ ಬಂದು ಕಳೆದ ಒಂದು ವಾರದಿಂದ ಹಂಪಿಯಲ್ಲಿ ಬೀಡು ಬಿಟ್ಟಿರುವ ಆನ್ ಜಾನ್ ಬೋನ್ ಅವರು ಮಂಗಳವಾರ ವಿಜಯ ವಿಠಲ ದೇವಾಲಯ ನೋಡಿ ಹೊರ ಬಂದಾಗ ‘ಮಾರ್ವಲಸ್’ ಎಂದು ಉದ್ಘರಿಸಿದರು. ಕಮಲ ಮಹಲ್, ಹಜಾರ ರಾಮ ದೇವಾಲಯ, ಆನೆ ಶಾಲೆ, ಶಿವ ಹಾಗೂ ಕೃಷ್ಣ ದೇವಾಲಯ ಲಕ್ಷ್ಮಿ ನರಸಿಂಹ, ಸಾಸಿವೆ ಕಾಳು ಹಾಗೂ ಕಡಲೇ ಕಾಳು ಗಣೇಶ, ಬಡವಿಲಿಂಗ ದೇವಾಲಯ, ಹಲವು ಉತ್ಖನನ ಸ್ಥಳಗಳನ್ನು ನೋಡಿದ ಅವರು ಮಾರ್ವಲಸ್ (ಅದ್ಭುತ) ಎಂಬ ಒಂದೇ ಪದದಲ್ಲಿ ಈ ವಾಸ್ತುಶಿಲ್ಪ ಕಲೆಯ ಬೀಡನ್ನು ವಿವರಿಸಿದರು.
೧೪ ವರ್ಷಗಳಿಂದ ನಡೆಯುತ್ತಿರುವ ಹಂಪಿ ಉತ್ಸವದ ಸಂಭ್ರಮ-ಸಡಗರ ವಿದೇಶಗಳಲ್ಲೂ ಜನಜನಿತವಾಗಿದೆ. ಹಂಪಿ ಉತ್ಸವಕ್ಕೆ ಕಳೆದ ನಾಲ್ಕು ವರ್ಷದಿಂದ ಸತತವಾಗಿ ಬಂದಿದ್ದೇನೆ. ನನ್ನ ಹಂಪಿಯಾತ್ರೆ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂದಿನ ವರ್ಷವೂ ಬರುತ್ತೇನೆ. ಈ ಹಬ್ಬವನ್ನು ನಾನು ತಪ್ಪಿಸಿಕೊಳ್ಳಲಾರೆ ಎನ್ನುತ್ತಾರೆ ಲೂಸಿಯಾನೊ. ಹಂಪಿ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಕ್ಷಣ ರೋಮಾಂಚನಗೊಳ್ಳುವ ಲೂಸಿಯಾನೊ ಈ ತಾಣವನ್ನು ಸುಪರ್ಬ್ ಎಂದು ಬಣ್ಣಿಸಿದರು.
ಹಂಪಿ ಉತ್ಸವ ಹಲವಾರು ಕಾರಣಕ್ಕೆ ವಿದೇಶಿಯರಿಗೆ ಇಷ್ಟವಾಗುತ್ತದೆ. ಇಲ್ಲಿನ ವಾಸ್ತುಶಿಲ್ಪ ಕಲೆಯ ಸೌಂದರ್ಯ ಒಂದೆಡೆಯಾದರೆ, ಉತ್ಸವದ ಅಂಗವಾಗಿ ಜರುಗುವ ಸಂಗೀತ ರಸಸಂಜೆ ಮತ್ತೊಂದು ಆಕರ್ಷಣೆ. ನಾನೊಬ್ಬ ಸಂಗೀತಗಾರ. ಪಾಶ್ಚಾತ್ಯ ಸಂಗೀತ ನನಗೆ ಅಚ್ಚುಮೆಚ್ಚು. ಹಿಂದೂಸ್ತಾನಿ, ಸುಗಮ ಸಂಗೀತವೂ ನನ್ನ ಮನಸೆಳೆದಿದೆ. ಸೋಮವಾರ ರಾತ್ರಿ ಹರಿಹರ ವೇದಿಕೆ ಹಾಗೂ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮಗಳನ್ನು ನೋಡಿ, ಆಲಿಸಿ, ಆನಂದಿಸಿದೆ. ಆಶಾ ಬೋಸ್ಲೆ ಅವರ ಗಾನಸುಧೆಯನ್ನು ಇನ್ನೂ ಸವಿಯಬೇಕು ಎನಿಸಿತು. ಭಾರತೀಯ ಸಂಗೀತಗಾರರು ತುಂಬಾ ಪ್ರತಿಭಾನ್ವಿತರು. ಇಲ್ಲಿನ ಸಂಗೀತ ಉತ್ಸವಗಳು ಮನಸೂರೆಗೊಳ್ಳುತ್ತವೆ. ಹರಿಹರ ವೇದಿಕೆಯಲ್ಲಿ ಮಂಗಳವಾರವೂ ಸಂಗೀತ ಸಂಜೆ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ ಎಂದು ಲೂಸಿಯಾನೊ ಅವರ ಗೆಳೆಯ ರಾಬರ್ಟ್ ಉಲಿದರು. ಹಂಪಿಗೆ ಬಂದು ನಾಲ್ಕು ದಿನಗಳಾಗಿವೆ. ಇನ್ನೂ ಎರಡು ದಿನಗಳು ಇಲ್ಲಿದ್ದು, ಬಾದಾಮಿಗೆ ಹೋಗುತ್ತೇನೆ ಎಂದು ರಾಬರ್ಟ್ ಹೇಳಿದರು. ಇಲ್ಲಿನ ಜನತೆ ಮೃದು ಮನಸ್ಸಿನವರು. ನಮಗೆ ಯಾರಿಂದಲೂ ತೊಂದರೆಯಾಗಿಲ್ಲ. ಸ್ಥಳೀಯರು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.ಹಂಪಿ ಬಗ್ಗೆ ಸ್ನೇಹಿತರಿಂದ ಕೇಳಿ ತಿಳಿದಿದ್ದ ನೋಮ್ ಸೈವನ್ ಅವರು ಸೋಮವಾರ ರಾತ್ರಿಯಷ್ಟೇ ಹಂಪಿಗೆ ಬಂದಿದ್ದಾರೆ. ವಿದ್ಯುತ್ ದೀಪಗಳಲ್ಲಿ ಹಂಪಿಯನ್ನು ನೋಡಿದ ಸೈವನ್ ‘ಅವಿಸ್ಮರಣೀಯ’ ಎಂದು ವರ್ಣಿಸಿದರು. ಇಸೇಲ್‌ನಿಂದ ಬಂದಿರುವ ಅವರು, ನನ್ನ ಇಸ್ರೇಲ್ ಗೆಳೆಯರು, ಭಾರತದ ಗೆಳೆಯರು ಹಂಪಿಯ ಬಗ್ಗೆ ಬಹಳ ಹೇಳಿದ್ದಾರೆ. ಹಾಗಾಗಿ ಹಂಪಿ ಉತ್ಸವವನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಎಲ್ಲಾ ದೇವಾಲಯಗಳು, ಹಾಗೂ ಸ್ಮಾರಕಗಳ ಬಳಿ ಜನಸ್ತೋಮ ತುಂಬಿದೆ. ಒಂದು ವಾರ ಈ ಸ್ಥಳದಲ್ಲಿ ಇದ್ದು, ಜನಸಂದಣಿ ಕಡಿಮೆಯಾದ ನಂತರ ಹಂಪಿಯ ಪರ್ಯಾಟನೆ ಮಾಡುತ್ತೇನೆ. ಜನ ಸಾಗರೋಪಾದಿಯಲ್ಲಿ ಹಂಪಿಗೆ ಬರುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತದೆ ಎಂದು ಅವರು ಹೇಳಿದರು.

Saturday, June 19, 2010

KANNADA LITERATURE

ಕನ್ನಡದ ನವೋದಯ
ನವೋದಯ ಎಂದರೆ ಹೊಸ ಹುಟ್ಟು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು. ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಒ.ಶ್ರೀಕಂಠಯ್ಯ, ತಮ್ಮ ಇಂಗ್ಲಿಷ್ ಗೀತಗಳು ಪುಸ್ತಕದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.
ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ಧ ಕೃತಿ ಶ್ರೀ ರಾಮಾಯಣ ದರ್ಶನಂ.
ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು.
ಈ ಕಾಲದ ಪ್ರಸಿದ್ಧ ಕವಿಗಳು: ಕುವೆಂಪು, ಶ್ರೀಕಂಠಯ್ಯ, ಬೇಂದ್ರೆ, ಪು ತಿ ನ, ಕ್ ಎಸ್ ನರಸಿಂಹಸ್ವಾಮಿ. ಈ ಕಾಲದ ಪ್ರಸಿದ್ಧ ಕಾದಂಬರಿಕಾರರು: ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್. ಈ ಕಾಲದ ಪ್ರಸಿದ್ಧ ನಾಟಕಕಾರರು: ಟಿ ಪಿ ಕೈಲಾಸಂ, ಶ್ರೀರಂಗ.
ನವ್ಯ
೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ. ಈ ಪ್ರಕಾರದ ಪಿತರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.
ಇತರ ಪ್ರಕಾರಗಳು
ಕಳೆದ ಐದು ದಶಕಗಳಲ್ಲಿ ಕನ್ನಡ ಸಾಹಿತ್ಯದ ದಾರಿ ಸಾಮಾಜಿಕ ವಿಷಯಗಳನ್ನು ಕುರಿತದ್ದಾಗಿದೆ. ಜಾತಿಪದ್ಧತಿಯ ತಾರತಮ್ಯಗಳಿಂದ ಬಂಡಾಯ ಮತ್ತು ದಲಿತ ಕಾವ್ಯ ಪ್ರೇರಿತವಾಗಿದೆ. ಸ್ತ್ರೀ-ವಿಮೋಚನಾ ಚಳುವಳಿಗಳು ಸ್ತ್ರೀ-ಕಾವ್ಯ ಪ್ರಕಾರಕ್ಕೆ ಎಡೆ ಮಾದಿಕೊಟ್ಟಿವೆ. ಸಣ್ಣ ಕತೆಗಳು ಹಾಗೂ ಭಾವಗಿತೆಗಳು ಸಹ ಇಪ್ಪತ್ತನೆ ಶತಮಾನದಲ್ಲಿ ಜನಪ್ರಿಯವಾದ ಸಾಹಿತ್ಯ ಪ್ರಕಾರಗಳು.
ಪ್ರಶಸ್ತಿಗಳು
ಕನ್ನದ ಸಾಹಿತ್ಯದ ಶಕ್ತಿಗೆ ಕನ್ನಡಿಯಾಗಿ ಕನ್ನಡ ಸಾಹಿತ್ಯಕ್ಕೆ ಇದುವರೆಗೆ ಏಳು ಸಾಹಿತಿಗಳು ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಜನಸಂಪರ್ಕ
ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದುಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸರ್ವಜನಮಾನ್ಯತೆ ಪಡೆಯುವುದು ಕಷ್ಟ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಕುಮಾರವ್ಯಾಸನ ಭಾರತ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಭಾವಗೀತೆಗಳು ಅನೇಕ ಕನ್ನಡ ಹಾಡುಗಳನ್ನು ಜನಪ್ರಿಯಗೊಳಿಸಿ ಜನರ ಬಾಯಲ್ಲಿ ಓಡಾಡುತ್ತಿವೆ.

Chitradurga History

ಚಿತ್ರದುರ್ಗ ಇತಿಹಾಸ ಇತಿಹಾಸ ದಲ್ಲಿ ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕ...